ನೇತ್ರಾವತಿ ನದಿ ಹಿನ್ನೀರು ಪ್ರದೇಶದಲ್ಲಿ ಸಿದ್ದಾರ್ಥ್‌ ಮೃತದೇಹ ಪತ್ತೆ

ಬುಧವಾರ, 31 ಜುಲೈ 2019 (08:47 IST)
ಮಂಗಳೂರು : ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ದಾರ್ಥ್‌ ಅವರ ಮೃತ ದೇಹ ಪತ್ತೆಯಾಗಿದೆ.



ಸತತ 36 ಗಂಟೆಗಳ ಶೋಧದ ಬಳಿಕ ನೇತ್ರಾವತಿ ನದಿ ಹಿನ್ನೀರು ಪ್ರದೇಶದಲ್ಲಿ ಸಿದ್ದಾರ್ಥ್‌ ಅವರ ಮೃತದೇಹ ಪತ್ತೆಯಾಗಿದೆ. ಮಂಗಳವಾರ ಬಾರೀ ಮಳೆಯ ಹಿನ್ನಲೆ ಶೋಧ ಕಾರ್ಯಾಚರಣೆ ಸ್ಥಗಿತ ಗೊಂಡಿತ್ತು ಆದರೆ ಇಂದು ಬೆಳಿಗ್ಗೆ ಮತ್ತೆ ಹುಡುಕಾಟ ಶುರುಮಾಡಿದ ಸ್ವಲ್ಪ ಹೊತ್ತಿನಲ್ಲೇ ಸಿದ್ದಾರ್ಥ್‌ ಅವರ ಮೃತದೇಹ ಪತ್ತೆಯಾಗಿದೆ.

 

ಕೊನೆಗೂ ಸಿದ್ದಾರ್ಥ್‌ ಬದುಕುಳಿದಿರಬಹುದೆಂಬ ಆಸೆ ಹುಸಿಯಾಗಿದ್ದು, ಅವರ ಕುಟುಂಬಸ್ಥರ  ಆಕ್ರಂದನ ಮುಗಿಲುಮುಟ್ಟಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ