ಸಿಎಂ ಕಾರಿಗೆ ಮುತ್ತಿಗೆ : ಯಡಿಯೂರಪ್ಪಗೆ ಕಪ್ಪು ಬಾವುಟ ಪ್ರದರ್ಶನ - ಲಾಠಿ ಚಾರ್ಜ್

ಭಾನುವಾರ, 6 ಅಕ್ಟೋಬರ್ 2019 (12:37 IST)
ಸಿಎಮ್ ಬಿ.ಎಸ್.ಯಡಿಯೂರಪ್ಪಗೆ ಕಪ್ಪು ಬಾವುಟದ ಸ್ವಾಗತ ಕೋರಲಾಗಿದ್ದು, ಪ್ರತಿಭಟನಾಕಾರರಿಗೆ ಲಾಠಿ ರುಚಿ ತೋರಿಸಲಾಗಿದೆ.

ನೆರೆ ಪರಿಸ್ಥಿತಿ ವೀಕ್ಷಿಸಲು ಯಾದಗಿರಿ ನಗರವನ್ನು ಪ್ರವೇಶಿಸ್ತಿದ್ದಂತೆ ಯಡಿಯೂರಪ್ಪಗೆ ಕಪ್ಪು ಬಾವುಟ ತೋರಿಸಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು.

ಗುರುಮಠಕಲ್ ಕ್ಷೇತ್ರದ ಅನುದಾನ, ಖಾಸಾ ಮಠಕ್ಕೆ ನೀಡಿದ ಅನುದಾನ ವಾಪಾಸ್ ಪಡೆದಿರೋ ಹಿನ್ನೆಲೆಯಲ್ಲಿ
ನಗರದ ಶಾಸ್ತ್ರೀ ಚೌಕ್ ಬಳಿ ಸಿಎಮ್ ಕಾರು ಮುತ್ತಿಗೆ ಹಾಕಿದರು ಜೆಡಿಎಸ್ ಕಾರ್ಯಕರ್ತರು.

ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಲಾಯಿತು. ಅಲ್ಲದೇ ಇಬ್ಬರು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ