ಬಾಳೆ ತೋಟದಲ್ಲಿ ತಡರಾತ್ರಿ ಆ ಕೆಲಸ ಮಾಡುತ್ತಿದ್ದವನಿಗೆ ಬಿತ್ತು ಗೂಸಾ

ಮಂಗಳವಾರ, 31 ಡಿಸೆಂಬರ್ 2019 (18:20 IST)
ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತಡರಾತ್ರಿ ಬಾಳೆ ತೋಟದಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗ್ರಾಮಸ್ಥರು ಗೂಸಾ ನೀಡಿದ್ದಾರೆ.
 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಯಾಚೇನಹಳ್ಳಿ ಗ್ರಾಮದಲ್ಲಿ ವರ್ಷಗಟ್ಟಲೆ ಕಷ್ಟಪಟ್ಟು ರೈತ ಬೆಳೆದ ಬಾಳೆಯ ತೋಟದಲ್ಲಿ ಲಕ್ಷ ರೂಪಾಯಿ ಬೆಲೆಬಾಳುವ ಬಾಳೆಯ ಗೊನೆಯನ್ನು ರಾತ್ರಿ ಹೊತ್ತು ಪದವಿ ಓದುತ್ತಿದ್ದ ವಿದ್ಯಾರ್ಥಿ ಕಳ್ಳತನ ಮಾಡೋಕೆ ಹೋಗಿ ಸಿಕ್ಕಿಬಿದ್ದಿದ್ದಾನೆ.

ಬಾಳೆ ತೋಟದಲ್ಲಿ ಕದ್ದು ಸಿಕ್ಕಿ ಹಾಕಿಕೊಂಡು ಮಾಲೀಕನ ಕೈಯಿಂದ ಪೆಟ್ಟು ತಿಂದಿದ್ದಾನೆ.

ಮಂಡ್ಯ ಮೂಲದ ಕಿಕ್ಕೇರಿಯ ಗ್ರಾಮದ ನಂದೇಶ್ ಕಳ್ಳತನಕ್ಕೆ ಯತ್ನಿಸಿದವನಾಗಿದ್ದಾನೆ.

ನಾನು ಓದುವ ಕಾಲೇಜಿಗೆ ಫೀಜು ಕಟ್ಟಲಿಕ್ಕೆ ನನ್ನ ಹತ್ತಿರ ಹಣ ಇರಲಿಲ್ಲ ಎಂದು ಉದ್ದೇಶಪೂರ್ವಕವಾಗಿ ಈ ರೀತಿ ಕದ್ದಿದ್ದೇನೆ ಎಂದು ಯಾಚೇನಹಳ್ಳಿ ಗ್ರಾಮಸ್ಥರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಬಾಳೆ ತೋಟದ ಮಾಲೀಕನಿಗೆ ಸಿಕ್ಕಿಹಾಕಿಕೊಂಡ ನಂದೇಶ್ ನನ್ನು ಗ್ರಾಮಸ್ಥರು ಥಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ