ಕಾಂಗ್ರೆಸ್ ನಾಯಕನ ಕುಟುಂಬದ ಬೀಗತನ ಮಾಡಲು ನಿರ್ಧಾರ ಮಾಡಿದ ಶ್ರೀರಾಮುಲು ಸಹೋದರಿ

ಶನಿವಾರ, 6 ಅಕ್ಟೋಬರ್ 2018 (11:41 IST)
ಬಳ್ಳಾರಿ : ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ ಎಂಬ ಮಾತಿಗೆ ಅಕ್ಷರಸಹ ನಿಜ ಎಂಬುದಕ್ಕೆ ಇದೀಗ  ಶಾಸಕ ಶ್ರೀರಾಮುಲು ಸಹೋದರಿ ಕಾಂಗ್ರೆಸ್ ನಾಯಕನ ಕುಟುಂಬದೊಂದಿಗೆ ಬೀಗತನ ಮಾಡಿಕೊಳ್ಳುತ್ತಿರುವುದೇ ಒಂದು ಮುಖ್ಯ ಉದಾಹರಣೆ.


ಶಾಸಕ ಶ್ರೀರಾಮುಲುರ ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಕಾಂಗ್ರೆಸ್ ನಾಯಕನ ಪುತ್ರನಿಗೆ ತಮ್ಮ ಪುತ್ರಿಯನ್ನು ಕೊಟ್ಟು ವಿವಾಹ ಮಾಡಿ ಸಂಬಂಧ ಬೆಳೆಸಲು ನಿರ್ಧಾರ ಮಾಡಿದ್ದಾರೆ. ಮಾಜಿ ಸಂಸದೆ ಜೆ.ಶಾಂತಾರ ಏಕೈಕ ಪುತ್ರಿ ಪ್ರಸನ್ನ ಲಕ್ಷಿಯನ್ನು ಕಾಂಗ್ರೆಸ್ ನಾಯಕ, ಪಾಲಿಕೆಯ ಮಾಜಿ ಸದಸ್ಯ ಬಿ.ಸೀನಾ (ಬ್ರಾಂಡಿಸೀನಾ)ರ ಪುತ್ರ ಪವನ್ ಕುಮಾರ್ ನೊಂದಿಗೆ ವಿವಾಹ ನಿಶ್ಚಿತ ಮಾಡಿಕೊಂಡಿದ್ದಾರೆ.


ಇವರ ವಿವಾಹ ಮಹೋತ್ಸವವು ಇದೇ ತಿಂಗಳು ಅಕ್ಟೋಬರ್ 11ರಂದು ಬಳ್ಳಾರಿಯ ಅಲ್ಲಂ ಭವನದಲ್ಲಿ ವಿವಾಹ ಕಾರ್ಯ ನಡೆಯಲಿದೆ. ಇನ್ನೊಂದು ವಿಶೇಷವೆನೆಂದರೆ ಈ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಶಾಸಕ ಶ್ರೀರಾಮುಲು ಹಾಗೂ ಕಾಂಗ್ರೆಸ್ ಎಂಎಲ್‍ಸಿ ಕೆ.ಸಿ.ಕೊಂಡಯ್ಯ ಸುಖಾಗಮನ ಬಯಸಿರುವುದು.


ಒಟ್ಟಿನಲ್ಲಿ ಹೊರಗಡೆ ಹಾವು ಮುಂಗುಸಿಯಂತೆ ಕಿತ್ತಾಡುವ ಈ ನಾಯಕರು ಒಳಗೊಳಗೆ ಬೀಗರು ಆಗುತ್ತಿರುವುದು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ