ಡಿಕೆಶಿ ಅಧ್ಯಕ್ಷರಾಗಿದ್ದಕ್ಕೆ ಶ್ರೀರಾಮುಲು ಹೀಗಾ ಹೇಳೋದು

ಬುಧವಾರ, 11 ಮಾರ್ಚ್ 2020 (20:58 IST)
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದ್ದಕ್ಕೆ ಸಚಿವ ಬಿ.ಶ್ರೀರಾಮುಲು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿರೋದಕ್ಕೆ ಶುಭ ಕೋರಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಅವರ ಆಯ್ಕೆಯಿಂದಾಗಿ ಬಿಜೆಪಿಗೆ ಬಹಳ ಸುಲಭವಾಯಿತು ಎಂದಿದ್ದಾರೆ.

ಬಿಜೆಪಿಗೆ ಹೇಗೆ ವರದಾನವಾಗಲಿದೆ ಅನ್ನೋದನ್ನು ಮುಂದೆ ಹೇಳುತ್ತೇನೆ ಅಂತ ಬಿ.ಶ್ರೀರಾಮುಲು ಮಾರ್ಮಿಕವಾಗಿ ಹೇಳಿದ್ದಾರೆ.
ಮುಳುಗಿರುತ್ತಿರುವ ಕೈ ಪಾಳೆಯಕ್ಕೆ ಯಾರೇ ಅಧ್ಯಕ್ಷರಾದರೂ ಅದು ಬಿಜೆಪಿಗೆ ಅನುಕೂಲವಾಗಲಿದೆ ಅಂತ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ