ವಿಪಕ್ಷಗಳ ಟೀಕೆ ಟಿಪ್ಪಣಿಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆ- ಸಿಎಂ

ಬುಧವಾರ, 24 ಮಾರ್ಚ್ 2021 (13:06 IST)
ಬೆಂಗಳೂರು : ವಿಪಕ್ಷಗಳ ಟೀಕೆ ಟಿಪ್ಪಣಿಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕೊರೊನಾ ಸೋಂಕು ಬಂದು ವರ್ಷವಾಗಿದೆ. ಈ ಅವಧಿಯಲ್ಲಿ ಹಲವು ಅಡ್ಡಿ, ಆತಂಕ, ಸಮಸ್ಯೆ, ಸವಾಲುಗಳನ್ನು ರಾಜ್ಯ ಸರ್ಕಾರ ಎದುರಿಸಿದೆ. ಈಗ ಕೊವಿಡ್ ಎರಡನೇ ಅಲೆ ಅಪ್ಪಳಿಸಿದೆ. ತಜ್ಞರ ಜೊತೆ ಸಭೆ ನಡೆಸಿ ಸೋಂಕು ತಡೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜತೆಗೂ ಸಭೆ ನಡೆಸಿದ್ದೇನೆ .ರಾಜ್ಯದ ಕ್ರಮಗಳನ್ನು ಪ್ರಧಾನಿ ಮೋದಿಗೆ ತಿಳಿಸಿದ್ದೇವೆ. ಆರ್ಥಿಕ ಪುನಶ್ಚೇತನ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಜನರು ಕೊರೊನಾ ನಿಯಮ ಪಾಲಿಸಬೇಕು. ಮಾಸ್ಕ್, ದೈಹಿಕ ಅಂತರ, ಸ್ವಚ್ಛತೆ ಕಡ್ಡಾಯ. ಜನ ಲಸಿಕೆ ಹಾಕಿಕೊಳ್ಳಲಿ . ಆರ್ಥಿಕ ಸಂಕಷ್ಟದಲ್ಲೂ ಉತ್ತಮ ಬಜೆಟ್ ಕೊಟ್ಟಿದ್ದೇವೆ. ಮಹಿಳೆಯರು, ರೈತರು, ಬಡವರ ಪರ ಕಾರ್ಯಕ್ರಮಗಳಿವೆ  ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ