ಬೌಬೌ ದಾಳಿ: ಬಾಲಕರಿಗೆ ಗಾಯ

ಗುರುವಾರ, 6 ಸೆಪ್ಟಂಬರ್ 2018 (18:20 IST)
ಮಹಾನಗರದಲ್ಲಿ ಬಾಲಕರ ಮೇಲೆ ಶ್ವಾನಗಳು ಅಟ್ಟಹಾಸ ಮತ್ತೆ ಮೆರೆದಿವೆ. ಪರಿಣಾಮ ಬಾಲಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಬೆಂಗಳೂರು ಮಹಾನಗರದಲ್ಲಿ ನಾಯಿಗಳಿ ದಾಳಿ ಪ್ರಕರಣ ಮತ್ತೆ ಮರುಕಳಿಸಿದೆ. ರಾಜಾಜಿನಗರದಲ್ಲಿರುವ ಗುಬ್ಬಣ್ಣ ಲೇಔಟ್ ಹತ್ತಿರದಲ್ಲಿ ಬೀದಿನಾಯಿಗಳು ಬಾಲಕರಿಬ್ಬರ ಮೇಲೆ ದಾಳಿ ನಡೆಸಿವೆ.

ರಾಜಾಜಿನಗರದ ಸೇಂಟ್ ಮೇರಿ ಶಾಲೆಯ ವಿದ್ಯಾರ್ಥಿಗಳಾದ ಆಕಾಶ್ ಮತ್ತು ಸಾಯಿ ಎಂಬುವರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ. ಘಟನೆಯಲ್ಲಿ ಬಾಲಕರು ಗಾಯಗೊಂಡಿದ್ದಾರೆ. ಸ್ಥಳೀಯರು ಬಾಲಕರ ನೆರವಿಗೆ ಬಂದು ನಾಯಿಗಳನ್ನು ದೂರ ಓಡಿಸಿದರು. ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಾಲಕರು ದಾಖಲಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ