ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಸರ್ಕಾರಿ ಹಾಸ್ಟೆಲ್`ನಲ್ಲಿ ಬಿತ್ತು ವಿದ್ಯಾರ್ಥಿ ಹೆಣ

ಶುಕ್ರವಾರ, 24 ಮಾರ್ಚ್ 2017 (11:25 IST)
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ವಿದ್ಯಾರ್ಥಿಯೊಬ್ಬ ಹತ್ಯೆಗೀಡಾಗಿರುವ ಘಟನೆ ಬೆಂಗಳೂರಿನ  ಅಂಜನಾ ನಗರದ ದೇವರಾಜು ಅರಸು ಸರ್ಕಾರಿ ಹಾಸ್ಟೆಲ್`ನಲ್ಲಿ ನಡೆದಿದೆ.ಹತ್ಯೆಗೀಡಾದ ವಿದ್ಯಾರ್ಥಿಯನ್ನ ರೋಹಿತ್ ಎಂದು ಗುರ್ತಿಸಲಾಗಿದ್ದು, ಗಾಯಾಳು ಮತ್ತೊಬ್ಬ ವಿದ್ಯಾರ್ಥಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ರವೀಶ್ ಎಂಬಾತ ರೋಹಿತ್`ನನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕಳೆದ ರಾತ್ರಿ ಶೌಚಾಲಯದ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದ್ದು, ಪಾನಮತ್ತನಾಗಿದ್ದ ರವೀಶ್ ಚಾಕುವಿನಿಂದ ಿಬ್ಬರು ವಿದ್ಯಾರ್ಥಿಗಳ ಮೇಲೆ ಗಲ್ಲೆ ನಡೆಸಿದ್ದು, ರವೀಶ್ ಎಂಬಾತ ಸಾವಿಗೀಡಾಗಿದ್ದಾನೆಂದು ತಿಳಿದುಬಂದಿದೆ.

ನೆಲಮಂಗಲದ ಸೋಲೂರು ಮೂಲದ ರೋಹಿತ್ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದನೆಂದು ತಿಳಿದುಬಂದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ