ಮಗನ ಕಾಟಕ್ಕೆ ತಂದೆಗೆ ಬಂತು ಇಂಥಾ ಗತಿ

ಮಂಗಳವಾರ, 24 ಡಿಸೆಂಬರ್ 2019 (18:30 IST)

ಜನ್ಮ ನೀಡಿದ ಮಗ ನೀಡುತ್ತಿದ್ದ ಕಾಟಕ್ಕೆ ಬೇಸತ್ತ ತಂದೆಯೊಬ್ಬನಿಗೆ ಬರಬಾರದ ಗತಿ ಬಂದೊದಗಿದೆ.
 

ಪುತ್ರ ಜಗಳ ತೆಗೆದ ವಿಚಾರವನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ತಂದೆಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಚಾಮರಾಜನಗರದ ಕುಮಚಹಳ್ಳಿಯ ಶಿವಲಿಂಗಪ್ಪ ಆತ್ಮಹತ್ಯೆಗೆ ಶರಣಾದ ತಂದೆಯಾಗಿದ್ದಾರೆ. ಇವರು ತಮ್ಮ ಮಗನೊಂದಿಗೆ ನಡೆದ ಜಗಳದಿಂದ ಮನಸ್ತಾಪ ಮಾಡಿಕೊಂಡು ದೇವಾಲಯಕ್ಕೆ ಹೋಗೋದಾಗಿ ಹೇಳಿ ಕೊನೆಗೆ ಶವವಾಗಿ ಪತ್ತೆಯಾಗಿದ್ದಾರೆ.

ತೆರಕಣಾಂಬಿ ಬಳಿಯ ಹುಲುಗನಮುರುಡಿ ಬೆಟ್ಟದಲ್ಲಿ ಶವ ಪತ್ತೆಯಾಗಿದ್ದು, ಈ ಕುರಿತು ಕೇಸ್ ದಾಖಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ