ಶನಿ, ಕಬ್ಬಾಳಮ್ಮ, ಶಂಭುಲಿಂಗೇಶ್ವರ ದೇವರಿಗೆ ಅಂಥದ್ದೇನಾಯ್ತು?

ಶನಿವಾರ, 19 ಅಕ್ಟೋಬರ್ 2019 (19:35 IST)
ಖದೀಮರು ದೇವರ ಮೇಲೂ ತಮ್ಮ ಕೈಚಳಕ ತೋರಿದ್ದಾರೆ.

ದೇವಾಲಯಗಳ  ಬೀಗ ಮುರಿದು ಖದೀಮರು ಸರಣಿ ಕಳ್ಳತನ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದು ಇಂಡ್ಲವಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತಮ್ಮನಾಯಕನಹಳ್ಳಿಯಲ್ಲಿರುವ ಶನಿಮಹಾತ್ಮ ದೇವಸ್ಥಾನ, ಕಬ್ಬಾಳಮ್ಮ ದೇವಸ್ಥಾನ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನಗಳ ಬೀಗ ಒಡೆದಿದ್ದಾರೆ.

ದೇವಾಲಯದಲ್ಲಿದ್ದ ಹುಂಡಿ, ಒಡವೆ, ದೇವರ ಕಿರೀಟವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಇನ್ನು ಹುಂಡಿಗಳಲ್ಲಿದ್ದ ಹಣವನ್ನು ತೆಗೆದುಕೊಂಡ ಕಳ್ಳರು ಖಾಲಿ ಹುಂಡಿಗಳನ್ನು ಊರಿನ ಹೊರವಲಯದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ