ಶಾಸಕ ಆನಂದ್ ಸಿಂಗ್ ಮಾಡಿದ್ರಾ ಅಂಥ ಕೆಲಸ ಮಾಡಿ ಗೆದ್ರಾ

ಶುಕ್ರವಾರ, 24 ಜನವರಿ 2020 (22:08 IST)
ವಿಜಯ ನಗರ ಜಿಲ್ಲೆ ಹೊಸದಾಗಿ ಮಾಡೋಕೆ ಹೊರಟಿರೋ ಶಾಸಕ ಆನಂದ್ ಸಿಂಗ್ ತಮ್ಮ ಕೆಲಸದಲ್ಲಿ ಸಫಲರಾಗಿದ್ದಾರೆ.

ಗಣಿ ನಾಡು ಬಳ್ಳಾರಿ ಜಿಲ್ಲೆಯನ್ನು ಎರಡು ಭಾಗ ಮಾಡಿ ಅದ್ರಲ್ಲಿ ಹಗರಿಬೊಮ್ಮನಹಳ್ಳಿ, ಸಿರಗುಪ್ಪಾ, ಹೊಸಪೇಟೆ ಹಾಗೂ ಕೊಟ್ಟುರು ಅಲ್ಲದೇ ಹಡಗಲಿ ತಾಲೂಕುಗಳನ್ನು ಸೇರಿಸಿ ವಿಜಯನಗರ ಹೊಸ ಜಿಲ್ಲೆ ಆಗೋದಿದೆ. ಈ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ.

ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿರೋದ್ರಿಂದ ಶಾಸಕ ಆನಂದ ಸಿಂಗ್ ಒಂದು ಹಂತದಲ್ಲಿ ಗೆಲುವು ಬೀರಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಶಾಸಕ ಸೋಮಶೇಖರ ರೆಡ್ಡಿಯ ಪ್ರತಿಭಟನೆಯ ಎಚ್ಚರಿಕೆಯ ನಡುವೆಯೂ ರಾಜ್ಯ ಸರಕಾರ ಮುಂದೆ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ