ಸುದೀಪ್ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಗೆ ವಿಗ್ನ

ಗುರುವಾರ, 14 ಅಕ್ಟೋಬರ್ 2021 (16:41 IST)
ನಟ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರ ಇಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಡೆಗಳಲ್ಲಿ ಮಾರ್ನಿಂಗ್ ಷೋ ಕ್ಯಾನ್ಸಲ್ ಆಗುತ್ತಿದೆ, ಇನ್ನು ಹಲವೆಡೆ ತಾಂತ್ರಿಕ ಕಾರಣಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ.
ಬೆಂಗಳೂರಿನ ಬೆಂಗಳೂರು ರಾಜ್ಯದ ವಿವಿಧೆಡೆಗಳಲ್ಲಿ ಅಭಿಮಾನಿಗಳಿಂದ ಭಾರೀ ಪ್ರತಿಭಟನೆ ಶುರುವಾಗಿದೆ. ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ವಿಷೇಶ ಪ್ರದರ್ಶನ ನೋಡಲು ಸುದೀಪ್ ಬೆಳ್ಳಂಬೆಳಗ್ಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 7 ಗಂಟೆಗೆ ಆರಂಭವಾಗಬೇಕಿದ್ದ ಚಿತ್ರ ಪ್ರದರ್ಶನ ರದ್ದಾಗಿ 10 ಗಂಟೆಯಾದರೂ ಶುರುವಾಗದ ಕಾರಣ, ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
 
ಈ ನಡುವೆಯೇ ಮಧ್ಯಾಹ್ನದ ಒಳಗೆ ಕೋಟಿಗೊಬ್ಬ 3 ಸಿನಿಮಾ ರಿಲಿಸ್ ಆಗದೆ ಇದ್ದರೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಚಿಕ್ಕೋಡಿಯ ಸುದೀಪ್ ಅಭಿಮಾನಿಯೊಬ್ಬ ಚಿತ್ರಮಂದಿರ ಬಳಿ ಹೇಳಿಕೆ ಚಿತ್ರಮಂದಿರದ ಎದುರೇ ಆತ್ಮಹತ್ಯೆಗೆ ಶರಣಾಗುವದಾಗಿ ಹೇಳಲಾಗಿದೆ. ಬೆಳಿಗ್ಗೆ ನಾಲ್ಕು ಗಂಟೆಯಿಂದ ಕಿಚ್ಚನ ಸಿನಿಮಾಗಾಗಿ ಕಾಯ್ತಾ ಇದ್ದೆವೆ. ಆದರೆ ಇನ್ನೂ ಶುರುವಾಗಿಲ್ಲ. ಇದನ್ನು ಗಮನಿಸಿ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ