ಪ್ರತಾಪ್ ಸಿಂಹಗೆ ಸುಮಲತಾ ಅಂಬರೀಶ್ ಕೊಟ್ಟ ತಿರುಗೇಟು ಹೀಗಿದೆ ನೋಡಿ!

ಮಂಗಳವಾರ, 17 ನವೆಂಬರ್ 2020 (10:42 IST)
ಮೈಸೂರು: ಆಯಮ್ಮ ಏನೂ ಕೆಲಸ ಮಾಡಲ್ಲ, ಮಂಡ್ಯದ ಕೆಲಸ ಏನೇ ಇದ್ದರೂ ನನಗೆ ಹೇಳಿ ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡುವ ವಿಡಿಯೋವೊಂದು ಮೊನ್ನೆಯಷ್ಟೇ ವೈರಲ್ ಆಗಿತ್ತು. ಪ್ರತಾಪ್ ಸಿಂಹರ ಕಾಮೆಂಟ್ ಗೆ ಈಗ ಸುಮಲತಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪುರಂದರದಾಸರ ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವ ನಾಲಿಗೆ ಎಂಬ ಸಾಲುಗಳನ್ನು ಪ್ರಕಟಿಸಿ ಪ್ರತಾಪ್ ಸಿಂಹಗೆ ಸುಮಲತಾ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ