ಅನರ್ಹ ಶಾಸಕ ಆರ್.ಶಂಕರ್ ಮುಖಕ್ಕೆ ಉಗಿದ ಬೆಂಬಲಿಗರು

ಶುಕ್ರವಾರ, 15 ನವೆಂಬರ್ 2019 (15:59 IST)
ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರು ಸಿಎಂ ನಿವಾಸದ ಎದುರು ಹೈಡ್ರಾಮಾ ನಡೆಸಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪರನ್ನ ಭೇಟಿ ಮಾಡಿದ ಬಳಿಕ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಟಿಕೆಟ್ ಬೇಡ ಅಂದಿದ್ದಾರೆ.

ಆರ್.ಶಂಕರ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಹಿಂದೇಟು ಹಾಕಿದ್ದರಿಂದ ಗರಂ ಆಗಿರೋ ಕಾರ್ಯಕರ್ತರು, ಮುಖಂಡರು ಅನರ್ಹ ಶಾಸಕನಿಗೆ ಘೇರಾವ್ ಹಾಕಿ ಛೀಮಾರಿ ಹಾಕಿದ್ದಾರೆ.

ರಾಣೆಬೆನ್ನೂರಿನಲ್ಲಿ ನಿವೇ ಚುನಾವಣೆಗೆ ನಿಲ್ಲಬೇಕು ಅಂತ ಬೆಂಬಲಿಗರು ಒತ್ತಾಯ ಮಾಡಿದ್ರು. ಆದರೆ ಸಿಎಂ ಜೊತೆ ಮಾತನಾಡಿರೋ ಆರ್.ಶಂಕರ್ ಕಣದಿಂದ ಹಿಂದೆ ಸರಿದಿದ್ದರಿಂದಾಗಿ ಅವರ ಬೆಂಬಲಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ