ಸರ್ಜಿಕಲ್ ಸ್ಟ್ರೈಕ್; ಬಿಜೆಪಿಯಿಂದ ಸಂಭ್ರಮ

ಮಂಗಳವಾರ, 26 ಫೆಬ್ರವರಿ 2019 (17:42 IST)
ಭಾರತದ ವಾಯು ಸೇನೆ ಪಾಕ್ ಉಗ್ರ ಸಂಘಟನೆಯ ಮೇಲೆ ಸರ್ಜಿಕಲ್ ಸ್ರೈಕ್ ದಾಳಿ ಮಾಡಿದ  ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ವಿವಿಧೆಡೆ ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ನಗರದ ಹಳೇಬಸ್ ನಿಲ್ದಾಣದಲ್ಲಿ ಕಾರ್ಯಕರ್ತರ ವಿಜಯೋತ್ಸವವನ್ನು ಪಾಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಸುತ್ತಾ ಆಚರಿಸಿದರು.

ಭಾರತ ಮಾತೆ, ಭಾರತದ ಯೋಧರ ಹಾಗೂ  ಪ್ರಧಾನಿ ಮೋದಿ ಪರ  ಘೊಷಣೆ ಕೂಗಲಾಯಿತು.

ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತ ಸರಕಾರಕ್ಕೆ ಅಭಿನಂದನೆ ಸಲ್ಲಿಕೆ  ಮಾಡಿದರು. ಪಾಕ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಭಾರತ ಸೇನೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ದಾಳಿ ನಡೆಸಿ ಉಗ್ರರನ್ನು ಮಟ್ಟ ಹಾಕುವಂತೆ ಒತ್ತಾಯ ಮಾಡಲಾಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ