ಭೂಮಿಯೊಳಗೆ ಅನುಷ್ಠಾನ ಮಾಡಿದ ಸ್ವಾಮೀಜಿ

ಭಾನುವಾರ, 27 ಜನವರಿ 2019 (16:07 IST)
ಭೂಮಿಯೊಳಗೆ ಮೂರು ದಿನಗಳ ಕಾಲ ಅನುಷ್ಠಾನವನ್ನು ಸ್ವಾಮೀಜಿ ಕೈಗೊಂಡಿದ್ದರು.

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಊಡಗಿ ರಸ್ತೆಯಲ್ಲಿರುವ ವಿಶ್ವಲಿಂಗ ವಿಷ್ಣು ಆಶ್ರಮದ ಸ್ವಾಮೀಜಿ ಶ್ರೀಮಂತ ತಾತನವರು ಭೂಮಿಯೊಳಗೆ ಮೂರು ದಿನಗಳ ಕಾಲ ಅನುಷ್ಠಾನ ಕೈಗೊಂಡಿದ್ದರು.

ಸೇಡಂ ತಾಲೂಕಿನ ಕಲಕಂಭ ಗ್ರಾಮದ ಗ್ರಾಮ ದೇವತೆ ದೇವಾಲಯದ ಬಳಿ ಭೂಮಿ ಒಳಗೆ .23 ರಿಂದ 26ರವರೆಗೆ ಅನುಷ್ಠಾನ ಕೈಗೊಂಡಿದ್ದರು.

26 ರಂದು ತಾತನವರ ಅನುಷ್ಠಾನ ಸಂಪನ್ನಗೊಂಡಿದ್ದು, ಅವರನ್ನು ಗ್ರಾಮಸ್ಥರು ಆನೆಯ ಮೇಲೆ ಮೆರವಣಿಗೆ ಮಾಡಿ ಸನ್ಮಾನಿಸಿದರು. ಲೋಕ ಕಲ್ಯಾಣಾರ್ಥವಾಗಿ ಶ್ರೀಮಂತ ತಾತನವರು ಭೂಮಿಯಲ್ಲಿ ಅನುಷ್ಠಾನ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ