ಹಗಲಲ್ಲೇ ಡಾಬಾದಲ್ಲಿ ನಡೆಯುತ್ತಿತ್ತು ಆ ದಂಧೆ

ಶನಿವಾರ, 7 ಸೆಪ್ಟಂಬರ್ 2019 (17:34 IST)
ಡಾಬಾವೊಂದರಲ್ಲಿ ಆ ದಂಧೆ ನಡೆಯುತ್ತಿರೋದನ್ನು ಪತ್ತೆ ಮಾಡಲಾಗಿದೆ.

ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಚಿಪ್ಪು ಹಂದಿ (ಪೆಂಗೋಲಿನ್)ಮಾರಾಟಕ್ಕೆ ಯತ್ನಿಸಿದವರನ್ನು ಬಂಧನ ಮಾಡಿದ್ದಾರೆ.

ಹೊಸಪೇಟೆ ರಸ್ತೆಯ ಡಾಬಾದಲ್ಲಿ ಪೆಂಗೋಲಿನ್ ಮಾರಾಟ ಮಾಡಲು ಯತ್ನಿಸಿದಾಗ ನಡೆದ ಕಾರ್ಯಾಚರಣೆಯಲ್ಲಿ ಕೂಡ್ಲಿಗಿ ತಾಲೂಕಿನ ವೆಂಕಟೇಶ, ನಾಗರಹುಣಸೆ ಗ್ರಾಮದ ತಿಪ್ಪೇಸ್ವಾಮಿ, ಮೊಳಕಾಲ್ಮೂರು ತಾಲೂಕಿನ  ಶಂಕರ್ ನನ್ನು ಬಂಧನ ಮಾಡಲಾಗಿದೆ.

ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ  ದೂರು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ