ವೈದ್ಯರ ಮುಷ್ಕರದ ಹಿನ್ನಲೆ; ಟ್ವೀಟ್ ಮೂಲಕ ವೈದ್ಯರಲ್ಲಿ ಸಿಎಂ ಮನವಿ

ಸೋಮವಾರ, 17 ಜೂನ್ 2019 (10:14 IST)
ಬೆಂಗಳೂರು : ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶದಾದ್ಯಂತ ವೈದ್ಯಕೀಯ ಸಂಸ್ಥೆಗಳು ಪ್ರತಿಭಟನೆಗೆ ಮುಂದಾಗಿದ್ದು, ಇಂದು ಎಲ್ಲ ಆಸ್ಪತ್ರೆಗಳ ಓಪಿಡಿ ಬಂದ್ ಆಗಿದೆ.



 



ಈ ಹಿನ್ನಲೆಯಲ್ಲಿ ಕರ್ನಾಟಕದ ವೈದ್ಯರು ಕೂಡ ಪ್ರತಿಭಟನೆಗೆ ಸಾಥ್ ಕೊಡಲಿರುವ ಕಾರಣ ರಾಜ್ಯದ್ಯಾಂತ ಸುಮಾರು 4500 ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗಲಿದೆ. ಇದರಿಂದ ರೋಗಿಗಳಿಗೆ ಬಹಳಷ್ಟು ತೊಂದರೆಯುಂಟಾಗುತ್ತಿದೆ. ಆದಕಾರಣ ವೈದ್ಯರ ಮುಷ್ಕರದ  ಬಗ್ಗೆ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಮನವಿವೊಂದನ್ನು ಮಾಡಿದ್ದಾರೆ.


‘ವೈದ್ಯರ ಮೇಲಿನ ಹಲ್ಲೆ ಯನ್ನು ನಾನು ಖಂಡಿಸುತ್ತೇನೆ. ಆದರೆ ವೈದ್ಯರ ಹೋರಾಟ ರೋಗಿಗಳಿಗೆ ತೊಂದರೆಯಾಗದಿರಲಿ’ ಎಂದು  ಸಿಎಂ ಟ್ವೀಟ್ ಮೂಲಕ ವೈದ್ಯರಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ