ಸ್ವಪಕ್ಷೀಯರ ವಿರೋಧದ ನಡುವೆಯೂ ಹೊಸ ಜಿಲ್ಲೆ ಪ್ರಕ್ರಿಯೆ ಆರಂಭಿಸಿದ ಬಿಜೆಪಿ ಸರ್ಕಾರ

ಶನಿವಾರ, 28 ಸೆಪ್ಟಂಬರ್ 2019 (11:42 IST)
ಬೆಂಗಳೂರು : ಸ್ವಪಕ್ಷೀಯರ ವಿರೋಧದ ನಡುವೆಯೂ ಬಿಜೆಪಿ ಸರ್ಕಾರ ಹೊಸ ಜಿಲ್ಲೆ ಘೋಷಣೆಗೆ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ.



ಈ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪನೆ ಮಂಡನೆಯಾಗಲಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಡಿಸಿಗೆ ಪತ್ರ ಬರೆಯಲಾಗಿದ್ದು, ವಿವರವಾದ ಪ್ರಸ್ತಾಪನೆ ಕಳುಹಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ ಮೂಲಕ ತಿಳಿಸಲಾಗಿದೆ. 

 

ಈ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ನೂತನ ಜಿಲ್ಲೆ ವಿಚಾರವಾಗಿ ಎಲ್ಲರನ್ನೂ ಕರೆದು ಚರ್ಚಿಸುತ್ತೇವೆ. ಇಂದು ಅಥವಾ ನಾಳೆ ಕೇಂದ್ರದ ಅನುದಾನ ಬಿಡುಗಡೆ ಆಗುತ್ತದೆ. ಈ ಸಂಬಂಧ ಕೇಂದ್ರ ಸಚಿವ ಜೋಶಿ ಜತೆ ಮಾತನಾಡಿದ್ದೇನೆ. ಅಕ್ಟೋಬರ್ 3 ರಂದು ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ