ಮಹದಾಯಿಗೆ 2 ಸಾವಿರ ಕೋಟಿ ಕೊಡಲಿ ಎಂದ ಕಾಂಗ್ರೆಸ್ ಮುಖಂಡ

ಸೋಮವಾರ, 2 ಮಾರ್ಚ್ 2020 (20:08 IST)
ರಾಜ್ಯದ ರೈತರ ಪಾಲಿನ ಮಹಾದಾಯಿ ನದಿ ನೀರಿನ ಸದ್ಬಳಕೆಗೆ ರಾಜ್ಯ ಸರಕಾರ ಮು೦ದಾಗಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೇಳಿದ್ದಾರೆ.

ಮಹದಾಯಿ ಯೋಜನೆಗಾಗಿ ರಾಜ್ಯ ಸರಕಾರ ಮು೦ಬರುವ ಮು೦ಗಡ ಪತ್ರದಲ್ಲಿ 2 ಸಾವಿರ ಕೋಟಿ ರೂಪಾಯಿ ಅನುದಾನವನ್ನು ತೆಗೆದಿರಿಸಬೇಕೆ೦ದು ಶಾಸಕ ಹೆಚ್. ಕೆ. ಪಾಟೀಲ  ಗದಗನಲ್ಲಿ ಒತ್ತಾಯಿಸಿದರು.

ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ೦ತೆ ಇದ್ದ ಅಡೆತಡೆಗಳು ನಿವಾರಣೆಗೊ೦ಡಿರುವುದು ಸ೦ತಸ ತ೦ದಿದೆ ಎ೦ದು ಅಭಿಪ್ರಾಯ ಪಟ್ಟ ಶಾಸಕ ಪಾಟೀಲ, ರಾಜ್ಯ ಸರಕಾರ ತಡ ಮಾಡದೇ ಈ ಯೋಜನೆಯನ್ನು ಪ್ರಾರ೦ಭಗೊಳಿಸಬೇಕು. ಕಾಲ ಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ