ಮಹಾ ಮಳೆಗೆ ನೆಲದ ಪಾಲಾದ ಬೆಳೆ : ಕಂಗಾಲಾದ ಬೆಳೆಗಾರ

ಶನಿವಾರ, 12 ಅಕ್ಟೋಬರ್ 2019 (18:59 IST)
ಸುರಿದ ಮಹಾಮಳೆಗೆ ಆ ಜಿಲ್ಲೆಯ ಜನರು ಹೈರಾಣಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಸುರಿಯುತ್ತಿರೋ ಧಾರಾಕಾರ ಮಹಾ ಮಳೆಗೆ ಬೆಳೆಗಳೆಲ್ಲ ಧರೆಗೆ ಉರುಳಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹರಿಹರ, ಹೊನ್ನಾಳಿ ತಾಲೂಕು ಸೇರಿದಂತೆ ಹಲವು ಕಡೆಗಳಲ್ಲಿ ಸುರಿದ ಮಳೆಯಿಂದ ಫಲಕ್ಕೆ ಬಂದ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ.

ಇದರಿಂದ ಸಾಲ-ಸೋಲ ಮಾಡಿ ಬೆಳೆದ ರೈತ ಕಂಗಾಲಾಗಿದ್ದಾನೆ.

ಹೊಲ, ಗದ್ದೆಯಲ್ಲಿ ನೆಲಕ್ಕೆ ಬಿದ್ದಿರೋ ಬೆಳೆಯಿಂದಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ