ಆ ಪ್ರಾಣಿಯ ಬಾಲ ಹಿಡಿದು ಹೋದ ಬಾಲಕ ಸಾವು

ಮಂಗಳವಾರ, 31 ಡಿಸೆಂಬರ್ 2019 (18:26 IST)
ಬಾಲಕನೊಬ್ಬ ಪ್ರಾಣಿಯೊಂದರ ಮೇಲೆ ಹೋಗಿ ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಎಮ್ಮೆಯ ಮೈ ತೊಳೆಯಲು ಹೋದ ಬಾಲಕ ನೀರು ಪಾಲಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ಸಂತೋಷ್ ನಗರದಲ್ಲಿರುವ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ.

ಹುಬ್ಬಳ್ಳಿಯ ಸಂತೋಷ್ ನಗರದ ಬಾಲಕ ಮಧ್ಯಾಹ್ನ ಎಮ್ಮೆಯ ಮೈ ತೊಳೆಯಲು ಸಂತೋಷ್ ನಗರದ ಕೆರೆಯ ಬಳಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಎಮ್ಮೆಯ ಬಾಲವನ್ನು ಹಿಡಿದುಕೊಂಡು ಕೆರೆಯಲ್ಲಿ ಇಜಾಡಲು ಹೋಗಿ ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾನೆ. ಇನ್ನು ಮೃತ ಪಟ್ಟ ಬಾಲಕನ ಬಗ್ಗೆ ಯಾರಿಗೂ ಸಧ್ಯಕ್ಕೆ ಮಾಹಿತಿ ಇಲ್ಲ.

ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ