ಚುನಾವಣೆ ಫಲಿತಾಂಶ ಸಮಾಧಾನ ತಂದಿದೆ ಎಂದ ರೇವಣ್ಣ

ಸೋಮವಾರ, 3 ಸೆಪ್ಟಂಬರ್ 2018 (17:38 IST)
ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಸಮಾಧಾನ ತಂದಿದೆ ಎಂದು  ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು.

ಹಾಸನದಲ್ಲಿ‌ಮಾತನಾಡಿದ ಹೆಚ್.ಡಿ ರೇವಣ್ಣ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದ ಜನತೆ ಮತ್ತೆ ಜೆಡಿಎಸ್ ಕೈ ಹಿಡಿದಿದ್ದಾರೆ.  ಹಾಸನ ನಗರಸಭೆಯಲ್ಲಿ ಜೆಡಿ ಎಸ್ 17 ಸ್ಥಾನವನ್ನು ಪಡೆದು ಅತಂತ್ರ ಸ್ಥಿತಿ ಇದ್ದರೂ ಹಾಸನದ ನಗರಸಭೆಯಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಹಿಡಿಯಲಿದೆ ಎಂದರು.   ಈಗಾಗಲೇ ಇಬ್ಬರು ಪಕ್ಷೇತರರೊಂದಿಗೆ ಮಾತನಾಡಿದ್ದೇನೆ ಎಂದರು.

ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಬಗ್ಗೆ ಮಾಹಿತಿ‌ ನೀಡಿದ ರೇವಣ್ಣ ಇನ್ನೇನಿದ್ದರು ಕೆಲಸಮಾಡಿ‌ ತೋರಿಸುತ್ತೇವೆ. ಕೆಲವರು ಸರ್ಕಾರದ ಸಾಧನೆ ಕಾಗದದಲ್ಲಿ ಇದೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡರಿಗೆ ಟಾಂಗ್ ನೀಡಿದರು. ಅಭಿವೃದ್ಧಿ ಅಂದ್ರೆ ಏನೆಂದು ಕರೆಯುತ್ತಾರೆ ಎಂದು  ಬಿಜೆಪಿ ಶಾಸಕ ಪ್ರೀತಂಗೌಡ ಗೆ ಗೊತ್ತಿಲ್ಲ ಎಂದರು.


ರಾಜ್ಯ ಸರ್ಕಾರದ ಸಾಧನೆ  ಕೇವಲ ಕಾಗದದಲ್ಲಿದೆ ಎಂದು‌ ಟೀಕಿಸಿದ್ದ ಶಾಸಕ ಪ್ರೀತಂಗೌಡರಿಗೆ ಚುನಾವಣೆ ಫಲಿತಾಂಶ ಉತ್ತರ ನೀಡಿದೆ ಎಂದೂ ಹೇಳಿದರು. ಹೊಳೆನರಸೀಪುರ ಪುರಸಭೆಯಲ್ಲಿ ಎಲ್ಲಾ 23 ಸ್ಥಾನ ಗೆದ್ದಿದ್ದೇವೆ ಇದು‌‌ ನಮಗೆ ಸಿಕ್ಕ ಅಭೂತಪೂರ್ವ ಗೆಲುವು ಎಂದು ಬಣ್ಣಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ