ಮರಳಿಗಾಗಿ ತೀವ್ರಗೊಂಡ ಹೋರಾಟ: ಬಂದ್

ಶನಿವಾರ, 1 ಡಿಸೆಂಬರ್ 2018 (14:16 IST)
ಮರಳಿಗಾಗಿ ಬಿಜೆಪಿ ಶಾಸಕ ಹೋರಾಟ ತೀವ್ರಗೊಳಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ನಡೆಸಿದರು. ಪರಿಣಾಮ ಆ ಪಟ್ಟಣದಲ್ಲಿ ಬಂದ್ ನ ವಾತಾವರಣ ನಿರ್ಮಾಣವಾಗಿದೆ.

ಮರಳಿಗಾಗಿ ದಾವಣಗೆರೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ಹೋರಾಟ ತೀರ್ವ ಸ್ವರೂಪ ಪಡೆದಿದೆ. ಇಂದು ನ್ಯಾಮತಿ ಬಂದ್ ಕರೆಕೊಟ್ಟಿದ್ದು ಶಾಸಕ ರೇಣುಕಾಚಾರ್ಯ ತಮ್ಮ ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ಮಾಡಿದರು. ಮರಳಿಗಾಗಿ ಆಗ್ರಹಿಸಿ ನ್ಯಾಮತಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವಾರು ತಿಂಗಳುಗಳಿಂದ ಹೊನ್ನಾಳಿ ಮತ್ತು ನ್ಯಾಮತಿ ಭಾಗದಲ್ಲಿ ಮರಳಿನ ಅಭಾವ ಸೃಷ್ಠಿಯಾಗಿದೆ. ಮರಳಿಲ್ಲದೆ ಮನೆ ಕಟ್ಟದಂತಾಗಿದೆ. ಕೂಲಿ ಕಾರರಿಗೆ ಕೆಲಸ ವಿಲ್ಲದಂತಾಗಿದ್ದು, ನಿರುದ್ಯೋಗ ಸೃಷ್ಠಿಯಾಗಿದೆ. ಇದರಿಂದ ಮರಳನ್ನು ವಿತರಿಸಿ ದರ ನಿಗದಿ ಮಾಡಿ ಎಂದು ಪ್ರತಿಭಟನಾಕಾರರ ಆಗ್ರಹವಾಗಿದೆ.

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ