ಭವಿಷ್ಯದ “ಅಂಬಾರಿ ಆನೆ” ಗೋಪಾಲಸ್ವಾಮಿ ಇನ್ನಿಲ್ಲ

ಗುರುವಾರ, 24 ನವೆಂಬರ್ 2022 (16:16 IST)
ಗೋಪಾಲಸ್ವಾಮಿ ಆನೆ ಸಾವಿಗೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದಾರೆ.ಗೋಪಾಲಸ್ವಾಮಿ ಆನೆ ಸಾವು ಬಹಳ ಬೇಸರ ತಂದಿದೆ ಎಂದು ಟ್ವೀಟ್ ಮೂಲಕ ಸಂತಾಪ  ಸೂಚಿಸಿದ್ದು,ಕಾಡಾನೆ ದಾಳಿಗೆ ಗೋಪಾಲಸ್ವಾಮಿ(39) ಆನೆ ಸಾವಾನಾಪ್ಪಿದ್ದು,ಮೇಯುವ ಸಲುವಾಗಿ ನೇರಳಕುಪ್ಪೆ ಬಿ' ಹಾಡಿಯ ಕ್ಯಾಂಪ್‌ನಲ್ಲಿ ಬಿಡಲಾಗಿತ್ತು.ಮಸ್ತಿಯಲ್ಲಿದ್ದ ಕಾಡಾನೆಯಿಂದ ಗೋಪಾಲಸ್ವಾಮಿ ಮೇಲೆ ದಾಳಿ ನಡೆದಿದೆ.ಕಾದಾಟದಲ್ಲಿದ್ದ ಕಾಡಾನೆಯನ್ನು ಹಿಮ್ಮೆಟ್ಟಿಸಲು ಮಾವುತ, ಅರಣ್ಯ ಸಿಬ್ಬಂದಿ ಮುಂದಾಗಿತ್ತು‌.ಈ ವೇಳೆ ಆನೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆನೆ ಬುಧವಾರ   ಸಾವಾನಾಪ್ಪಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ