ಕಬ್ಬಿಣ ಕಂಥಿ ಸ್ವಾಮೀಜಿ ಜಾತಕ ಬಿಚ್ಚಿಟ್ಟ ಹೆಚ್.ಡಿ. ದೇವೇಗೌಡರು

ಗುರುವಾರ, 21 ನವೆಂಬರ್ 2019 (17:56 IST)
ಹಿರೇಕೆರೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ನಾಮಪತ್ರ ಸಲ್ಲಿಸಿ ಬಳಿಕ ವಾಪಸ್ ಪಡದಿರೋ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯರ ಚಾತಕವನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಚ್ಚಿಟ್ಟಿದ್ದಾರೆ.

ಕಬ್ಬಿಣಕಂಥಿ ಸ್ವಾಮೀಜಿ ಹಾಗೂ ಅಥಣಿಯಲ್ಲಿ ಗುರು ದಾಶ್ಯಾಳ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದಕ್ಕೆ ಹಲವರು ಒತ್ತಡ ಹೇರಿದ್ದು, ಇವರಿಗೆ ನಾವಾಗೇ ಟಿಕೆಟ್ ಕೊಟ್ಟಿದ್ದಿಲ್ಲ. ಅವರಾಗೇ ಬಂದು ಕೇಳಿದ್ದರು ಎಂದಿದ್ದಾರೆ.

ರಾಜ್ಯ, ರಾಷ್ಟ್ರದಲ್ಲಿ ಹಲವು ಸ್ವಾಮೀಜಿಗಳು ಚುನಾವಣೆಗೆ ನಿಂತು ವಿಧಾನಸಭೆ, ಸಂಸತ್ ಪ್ರವೇಶ ಪಡೆದಿದ್ದಾರೆ. ಆದರೆ ಜೆಡಿಎಸ್ ಟಿಕೆಟ್ ಪಡೆದ ಕಾರಣ ದೊಡ್ಡದಾಗಿ ಬಿಂಬಿಸಲಾಗ್ತಿದೆ ಅಂತ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ