ನೀರಾವರಿ ಹೋರಾಟಗಾರರು ವಿಜ್ಞಾನಿಗಳಲ್ಲ ಎಂದ ಶಾಸಕ

ಶುಕ್ರವಾರ, 27 ಜುಲೈ 2018 (20:12 IST)
ಕೆಸಿ ವ್ಯಾಲಿ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕೆಸಿ ವ್ಯಾಲಿ ನೀರನ್ನ ನಾನೇ ಕುಡಿಯುತ್ತೇನೆ ಎಂದು ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ.

ಕೆಸಿ ವ್ಯಾಲಿ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕೆಸಿ ವ್ಯಾಲಿ ನೀರನ್ನ ನಾನೇ ಕುಡಿಯುತ್ತೇನೆ ಎಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಹೇಳಿಕೆ ನೀಡಿದ್ದಾರೆ.

ನೀರನ್ನ ಕುಡಿದು ಜಿಲ್ಲೆಯ ಜನರ ಆತಂಕ ನಿವಾರಣೆ ಮಾಡುವೆ. ಕೆಸಿ ವ್ಯಾಲಿ ನೀರು ವಿಷವಲ್ಲ, ಅದು ಜಿಲ್ಲೆಯ ಪಾಲಿಗೆ ಅಮೃತವಾಗಿದೆ. ನೀರು ಹೆಚ್ಚಾಗಿ ಹರಿಯುವುದರಿಂದ ನೊರೆ ಬರುವುದು ಸಹಜ.  ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸಲು ಕೆಸಿ ವ್ಯಾಲಿ ನೀರನ್ನ ಹರಿಸಲಾಗುತ್ತದೆ.  ಜಿಲ್ಲೆಯ ಅಭಿವೃದ್ದಿಯನ್ನ ಸಹಿಸಲಾರದವರು ಅಡ್ಡಿಪಡಿಸುತ್ತಿದ್ದಾರೆ ಎಂದಿದ್ದಾರೆ.

ಕೆಸಿ ವ್ಯಾಲಿ ನೀರು ಹರಿಸಬಾರದು ಅಂತಾ ಹೇಳುವ ನೀರಾವರಿ ಹೋರಾಟಗಾರರು ವಿಜ್ಞಾನಿಗಳಲ್ಲ ಎಂದೂ ಹೋರಾಟಗಾರರ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ ಕಿಡಿಕಾರಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ