ಜೆಡಿಎಸ್ ಎಂಎಲ್ಸಿ ವಿರುದ್ಧ ಜೆಡಿಎಸ್ ಶಾಸಕ ಬಹಿರಂಗ ಅಸಮಾಧಾನ

ಗುರುವಾರ, 16 ಆಗಸ್ಟ್ 2018 (14:05 IST)
ಜೆಡಿಎಸ್ ಎಂಎಲ್ಸಿ ವಿರುದ್ಧ ಜೆಡಿಎಸ್ ಶಾಸಕ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಎಂಎಲ್ಸಿ ಅಪ್ಪಾಜಿಗೌಡ ತಮ್ಮದೇ ಪಕ್ಷದ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳ ಹಾವಳಿ ಹೆಚ್ಚಾಗಿದ್ದು, ಅವ್ರನ್ನು ವರ್ಗಾವಣೆ ಮಾಡಬೇಕಿದೆ. ಆದ್ರೆ ಅವ್ರ ವರ್ಗಾವಣೆಗೆ ಶಾಸಕ ಸುರೇಶ್ ಗೌಡ ಆಸಕ್ತಿ ತೋರಿಸ್ತಿಲ್ಲ.

ಭ್ರಷ್ಟ ಅಧಿಕಾರಿಗಳ ಜೊತೆಗೆ ಗುತ್ತಿಗೆದಾರರು ಸಹ ಶಾಮೀಲಾಗಿದ್ದು, ಇದು ಶಾಸಕರ ಗಮನಕ್ಕೆ ಬಂದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ ಎಂದು ತಮ್ಮದೇ ಪಕ್ಷದ ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈ ಮೂಲಕ ಜೆಡಿಎಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಬೀತಾದಂತಾಗಿದೆ.  

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ