ದೆವ್ವ ಓಡಿಸಲು ಪೊಲೀಸರಿಗೆ ಫೋನ್ ಮಾಡಿದ ಭೂಪ

ಗುರುವಾರ, 18 ಜುಲೈ 2019 (15:10 IST)

ದೆವ್ವವನ್ನು ಬಿಡಿಸಬೇಕು. ಅದನ್ನ ದೂರ ಓಡಿಸಬೇಕೆಂದು ಯುವಕನೊಬ್ಬ ಪೊಲೀಸರಿಗೆ ಕರೆ ಮಾಡಿದ್ದಾನೆ.

ವ್ಯಕ್ತಿಯೊಬ್ಬ ದೆವ್ವವಾಗಿ ನನ್ನ ತಂಗಿಗೆ ಕಾಡುತ್ತಿದ್ದಾನೆ. ಆತನೊಂದಿಗೆ ನಾನು ಮಾತನಾಡಿದ್ದೇನೆ. ಆದರೆ ಆತ ದೆವ್ವವಾಗಿದ್ದು, ನನ್ನ ತಂಗಿಯನ್ನು ಬಿಟ್ಟು ಹೋಗುತ್ತಿಲ್ಲ. ಹೀಗಂತ ಯುವಕ ಆನಂದ್ ಪಟೇಲ್ ಎಂಬಾತ ಪೊಲೀಸರಿಗೆ ಕರೆ ಮಾಡಿದ್ದಾನೆ.

ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಫೋನ್ ಕರೆ ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಯುವಕ ಹೇಳಿದ್ದು ಕೇಳಿ ಆತನ ಮನವೊಲಿಸಲು ಪೊಲೀಸರು ಯತ್ನಿಸಿದ್ದರು.

ಪೊಲೀಸರು ಬಂದದ್ದನ್ನು ನೋಡಿದ ಯುವಕನ ತಂದೆ, ನಮಗೆ ಗೊತ್ತಿಲ್ಲದಂತೆ ಪೋನ್ ಮಾಡಿದ್ದಾನೆ. ನಾವು ತಿಳುವಳಿಕೆ ಹೇಳುತ್ತೇವೆ ಅಂತ ಪೊಲೀಸರಿಗೆ ಹೇಳಿ ಕಳಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ