ಲಾರಿ ಕ್ಲೀನರ್ ನ ಜೀವ ತೆಗೆದ ಚರಂಡಿ

ಬುಧವಾರ, 19 ಡಿಸೆಂಬರ್ 2018 (11:42 IST)
ಚರಂಡಿಗೆ ಹಾಕಲಾದ ಸ್ಲಾಬ್ ತುಂಡಾಗಿ ಲಾರಿ ಮುಗುಚಿದ ಪರಿಣಾಮ ಲಾರಿ ಕ್ಲೀನರ್ ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳೂರು ಪಂಪ್ ವೆಲ್ ಕಡೆಯಿಂದ ಉಳ್ಳಾಲ ಕಡೆಗೆ ಬರುವಾಗ ಲಾರಿಯೊಂದು ಚರಂಡಿ ಮೇಲೆ ಹಾಕಿದ್ದ ಲಾರಿ ಚಲಾಯಿಸಿದ್ದಾನೆ.

ಆಗ ಲಾರಿ ಮುಗುಚಿದೆ. ಇದರಿಂದಾಗಿ ಲಾರಿಯಲ್ಲಿದ್ದ ಕ್ಲೀನರ್ ವಸಂತಕುಮಾರ್ (25) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆ ಕುರಿತಂತೆ ನಿರ್ಲಕ್ಷ್ಯ ಚಾಲನೆ ತೋರಿದ ಚಾಲಕ ಜಯ ಪೂಜಾರಿ ಹಾಗೂ ಚರಂಡಿ ಕಾಮಗಾರಿಯನ್ನು ಕಳಪೆಯಾಗಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ