ಗ್ರಾಮಸ್ಥರಿಗೆ ಕಚ್ಚಿದ್ದ ಹುಚ್ಚು ನಾಯಿ ಹತ್ಯೆ

ಶನಿವಾರ, 23 ಡಿಸೆಂಬರ್ 2023 (16:41 IST)
ಮನೆ ಮುಂದಿದ್ದ ಮಕ್ಕಳು ಹಾಗೂ ವೃದ್ಧರನ್ನು ಹುಚ್ಚು ನಾಯಿ ಕಚ್ಚಿದ ಹಿನ್ನೆಲೆ ಗ್ರಾಮಸ್ಥರು ನಾಯಿಯನ್ನು
ಹೊಡೆದು ಕೊಂದಿದ್ದಾರೆ.. ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿ ಈ ಘಟನೆ ನಡೆದಿದೆ..

ಇಬ್ಬರು ಮಕ್ಕಳು ಸೇರಿದಂತೆ 12 ಜನರಿಗೆ ಹುಚ್ಚು ನಾಯಿ ಕಚ್ಚಿ ಘಾಸಿಗೊಳಿಸಿದೆ.. ಮುಂಜಾನೆ ಏಕಾಏಕಿ ಹುಚ್ಚು ನಾಯಿ ದಾಳಿ ನಡೆಸಿದೆ.. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.. ನಾಯಿಗಳ ಹಾವಳಿಯಿಂದಾಗಿ ಜನರು ರೋಸಿ ಹೋಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ