ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ ಎಂದ ಸಚಿವ

ಶುಕ್ರವಾರ, 15 ಮಾರ್ಚ್ 2019 (20:35 IST)
ಉಮೇಶ್ ಜಾಧವ್ ಪಕ್ಷ ಬಿಟ್ಟಿರೋದ್ರಲ್ಲಿ ನಾನು ಆರೋಪಿ ನಂಬರ್ ಒನ್ ಆಗಿದ್ದೇನೆ. ಹೀಗಂತ ಸಚಿವರೊಬ್ಬರು ಹೇಳಿಕೊಂಡಿದ್ದಾರೆ.

ಉಮೇಶ್ ಜಾಧವ ಅವರು ಚಾರ್ಜ್ ಶೀಟ್ ಬಿಡುಗಡೆ ಮಾಡಲಿ. ಎಲ್ಲದಕ್ಕೂ ಒಮ್ಮೆಯೇ ಉತ್ತರ ಕೊಡುತ್ತೇನೆ ಎಂದು
ಕಲಬುರಗಿ ಜಿಲ್ಲೆಯ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಆರೋಪಗಳಿಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಚಿಂಚೋಳಿ ಕ್ಷೇತ್ರದ ಕಡೆಗಣನೆಯ ಪ್ರಶ್ನೆಯೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಎಲ್ಲ ಕ್ಷೇತ್ರಗಳಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದೇನೆ. ಯಾವುದೋ ಆಮಿಷಕ್ಕೆ ಒಳಗಾಗಿ ಜಾಧವ್ ಪಕ್ಷ ಬಿಟ್ಟಿದ್ದಾರೆ. ಅವರು ಪಕ್ಷ ಬಿಡೋ ವಿಷಯದಲ್ಲಿ ನಾನೇ ಆರೋಪಿ ನಂಬರ್ ಒನ್ ಆಗಿದ್ದೇನೆ.

ಅದೇನು ಆರೋಪ ಮಾಡ್ತಾರೋ ಮಾಡಲಿ. ನನ್ನ ವಿರುದ್ಧ ಚಾರ್ಜ್ ಶೀಟ್ ಸಹ ಬಿಡುಗಡೆ ಮಾಡಲಿ. ಹೋದಲ್ಲೆಲ್ಲಾ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ. ಎಲ್ಲದಕ್ಕೂ ಒಮ್ಮೆಯೇ ಉತ್ತರ ಕೊಡುತ್ತೇನೆ ಅಂತ ಕಲಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ