ಕಾಂಗ್ರೆಸ್ ನವರು ವಿಪಕ್ಷದಲ್ಲಿರಲೂ ಅಯೋಗ್ಯರು ಎಂದ ಸಚಿವ

ಶುಕ್ರವಾರ, 9 ಅಕ್ಟೋಬರ್ 2020 (18:21 IST)
ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿ ಇರುವುದಕ್ಕೂ ಕಾಂಗ್ರೆಸ್ ನವರು ಅಯೋಗ್ಯರು.

ಹೀಗಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಶಾಂತಿ ಭಂಗ ಮಾಡಲು ಯತ್ನಿಸುತ್ತಿರುವವರು ವಿಪಕ್ಷದಲ್ಲಿ ಇರಲು ಅಯೋಗ್ಯರು ಎಂದು ಜರಿದಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್‌ ಪಕ್ಷದವರು ಒಂದು ಕೋಮಿನವರನ್ನು ಎತ್ತಿ ಕಟ್ಟಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ