ನಿವೇಶಕ್ಕಾಗಿ ಶಾಸಕನ ಕಾಲಿಗೆ ಬಿದ್ದ ವೃದ್ಧೆ

ಶನಿವಾರ, 21 ಜುಲೈ 2018 (18:44 IST)
ಅವರು ವಯೋವೃದ್ಧೆ. ಆದರೇನಂತೆ ಅವರ ಸಮಸ್ಯೆ ಹಲವು ವರ್ಷಗಳಿಂದ ಬಗೆ ಹರಿದಿರಲಿಲ್ಲ. ಹೀಗಾಗಿ ಕೊನೆಗೆ ನಡು ರಸ್ತೆಯಲ್ಲಿಯೇ ಶಾಸಕನ ಕಾಲಿಗೆ ಎರಗಿ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು.

ಮೂಡಿಗೆರೆ ಶಾಸಕನ ಪರಿ ಪರಿಯಾಗಿ ಬೇಡಿಕೊಂಡು ಮಹಿಳೆಯೊಬ್ಬಳು ಕಾಲಿಗೆರಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಕಾಲಿಗೆ ಬಿದ್ದ ಗಿರಿಜನ ಮಹಿಳೆ ಶಿವಮ್ಮ ತಮ್ಮ ಸಮಸ್ಯೆ ಪರಿಹರಿಸಿಕೊಡುವಂತೆ ಮನವಿ ಮಾಡಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಬಳಿ ಶಾಸಕನ ಅಡ್ಡಗಟ್ಟಿ ನಿವೇಶನದ ಬೇಡಿಕೆ ಇಟ್ಟು ಕಾಲಿಗೆ ಬಿದ್ದ ಶಿವಮ್ಮ ವಿನಂತಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೂರಿಗಾಗಿ ಅಲೆಯುತ್ತಿರುವ ಮಹಿಳೆ, ಶಾಸಕ ಕುಮಾರಸ್ವಾಮಿ ಕಂಡು ಅಡ್ಡಗಟ್ಟಿ ನಿಲ್ಲಿಸಿ ಪ್ರಶ್ನೆಗಳ ಸುರಿಮಳೆ ಹಾಕಿ ಪೇಚಿಗೆ ಸಿಲುಕಿಸಿದ್ದಾಳೆ. ತರಾಟೆಗೂ ತೆಗೆದುಕೊಂಡಿದ್ದಾಳೆ.

ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ  ಮಹಿಳೆಯರ ಕಾಟ ತಪ್ಪಿದಂತಿಲ್ಲ. ಹೋದಲೆಲ್ಲಾ ಸರ್ಕಾರದ ಯೋಜನೆಗಳ ಬಗ್ಗೆ ತರಾಟೆಗೆ ತೆಗೆದುಕೊಳ್ಳುತ್ತಿರುವ ನಾರಿಯರು ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅನ್ನಭಾಗ್ಯ ಯೋಜನೆ  ಅಕ್ಕಿ ಕಡಿತದ ಬಗ್ಗೆ ನಡುರಸ್ತೆಯಲ್ಲಿ ಬೆವರಿಳಿಸಿದ್ದ ಸುಬ್ಬಮ್ಮ ಎಂಬ ಮಹಿಳೆ ಗಮನ ಸೆಳೆದಿದ್ದರು. ಈಗ ಶಿವಮ್ಮ, ಶಾಸಕರನ್ನು ತರಾಟೆಗೆ ತೆಗೆದುಕೊಂಡು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾಳೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ