ಮನೆಗೆ ನುಗ್ಗಿ ಮಾಲೀಕನ ಕೊಂದ ದುಷ್ಕರ್ಮಿಗಳು

ಗುರುವಾರ, 25 ಅಕ್ಟೋಬರ್ 2018 (17:12 IST)
ಮನೆಗೆ ನುಗ್ಗಿ ಬಡಿಗೆಯಿಂದ ಹೊಡೆದು ಮನೆ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಐದಾರು ಜನ ದುಷ್ಕರ್ಮಿಗಳು ರಾತ್ರಿ ವೇಳೆ ಮನೆ ಹೊರಗೆ ಮಲಗಿದ್ದ ಮನೆ ಮಾಲೀಕ ಬಸವರಾಜ ತೆಲಕಪಲ್ಲಿ (50) ಎಂಬುವರನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ಮನೆಯೊಳಗೆ ಇದ್ದವರು ಗಲಾಟೆ ಕೇಳಿ ಬಾಗಿಲು ತೆರೆದು ಹೊರಬಂದಾಗ ಮನೆಯೊಳಗಿದ್ದ ಬಾಲಮ್ಮ, ರವಿ, ವೆಂಕಟೇಶ ಎಂಬುವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ