ಗಂಡ ಹೆಂಡತಿ‌ ಜಗಳದಲ್ಲಿ ಎದುರು ಮನೆಯ ಗರ್ಭಿಣಿ ಮಗು‌ ಹೊಟ್ಟೆಯಲ್ಲಿಯೇ ಸಾವು

ಬುಧವಾರ, 24 ಅಕ್ಟೋಬರ್ 2018 (22:56 IST)
ಪತ್ನಿ ಮೇಲೆ ಬೀಸಿದ ಕಲ್ಲು‌ ಎದುರು ಮನೆಯ‌ ಗರ್ಭಿಣಿ ಹೊಟ್ಟೆಗೆ ತಾಗಿದ ಕಾರಣ ಗರ್ಭಿಣಿ ಹೊಟ್ಟೆಯಲ್ಲಿದ್ದ ಶಿಶು ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ‌ತಾಲೂಕಿನ ಹುನಕುಂಟೆ ಗ್ರಾಮದಲ್ಲಿ ನಡೆದ ಅವಘಡ ಇದಾಗಿದೆ.
ಗ್ರಾಮದ ಬಸನಗೌಡ ಕವಡಿಮಟ್ಟಿ ಆತನ ಪತ್ನಿ ಜಗಳ ಮಾಡುತ್ತಿದ್ದರು. ಜಗಳದಲ್ಲಿ ಸಿಟ್ಟಿನಿಂದ ಬಸನಗೌಡ ಪತ್ನಿಯತ್ತ ಕಲ್ಲು‌ ಬೀಸಿದ್ದನು. ಆದರೆ ಆ ಕಲ್ಲು ಗುರಿ ತಪ್ಪಿ ಎದುರು ಮನೆಯ ಬಳಿ ಬಟ್ಟೆ ಜೋಡಿಸುತ್ತಿದ್ದ ಗರ್ಭಿಣಿ ರೇಣುಕಾ ರಾಮಣ್ಣ ಬೆಲವಂತ್ರಕಂಟಿ ಹೊಟ್ಟೆಗೆ ಬಡಿದಿತ್ತು. 

ಹೆರಿಗೆಗಾಗಿ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮಗು‌ ಜನನವಾಗಿದೆ.
ಕಲ್ಲಿನ ಏಟು ಬಿದ್ದ ಕಾರಣ ಮಗು ಮೃತಪಟ್ಟಿದೆ ಎಂದ ವೈದ್ಯರು ತಿಳಿಸಿದ್ದಾರೆ. ಪತ್ನಿಯ ಈ ಸ್ಥಿತಿಗೆ ಎದುರು ಮನೆಯ ಬಸನಗೌಡ ಎಸೆದ‌ ಕಲ್ಲು  ತಾಕಿದ್ದೇ ಕಾರಣವೆಂದು ರೇಣುಕಾ ಪತಿ ರಾಮಣ್ಣ ಆರೋಪ ಮಾಡಿದ್ದಾರೆ.

ಬಸನಗೌಡ ಬಂಧನಕ್ಕೆ ಆಗ್ರಹ ಮಾಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ