ಕಾಳಿ ನದಿಗೆ ಹಾರಿದ ವ್ಯಕ್ತಿ: ರಕ್ಷಣೆ ಮಾಡಿದ ಪೊಲೀಸರು

ಭಾನುವಾರ, 23 ಡಿಸೆಂಬರ್ 2018 (15:57 IST)
ಸೇತುವೆಯಿಂದ ಕಾಳಿ ನದಿಗೆ ಹಾರಿದ್ದ ಅಪರಿಚಿತ ವ್ಯಕ್ತಿಯೋರ್ವನನ್ನು ಕರಾವಳಿ ಕಾವಲು ಪಡೆ ಪೊಲೀಸರು ರಕ್ಷಿಸಿರುವ ಘಟನೆ ನಡೆದಿದೆ.

ಕಾಳಿ ಸೇತುವೆಯಿಂದ ನದಿಗೆ ಅಪರಿಚಿತ ವ್ಯಕ್ತಿ ಹಾರಿದ್ದಾನೆ. ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕಾಳಿ ನದಿ ಸೇತುವೆಯಿಂದ ಈತ ಹಾರಿದ್ದ. ಆದರೆ ನದಿ ಅಂಚಿನ ಕಾಳಿ ರಿವರ್ ಗಾರ್ಡನ್ ನಲ್ಲಿ ವೈನ್ ಮೇಳ ನಡೆಯುತ್ತಿರುವ ಕಾರಣ ಕರಾವಳಿ ಕಾವಲು ಪೊಲೀಸ್ ಪಡೆಯ ಸಿಬ್ಬಂದಿ ಇಂಟರ್‌ಸೆಪ್ಟರ್ ಬೋಟ್ ಮೂಲಕ ಗಸ್ತು ತಿರುಗುತ್ತಿದ್ದರು.

ನದಿಗೆ ಹಾರಿರುವುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು.  ಸ್ಥಳಕ್ಕೆ ತೆರಳಿ ಆತನನ್ನು ರಕ್ಷಣೆ ಮಾಡಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುತ್ತಿದ್ದು, ಸಂಜೆವರೆಗೂ ಪ್ರಜ್ಞೆ ಬಂದಿಲ್ಲ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ