ಪೋಷಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರೇಮಿಗಳು!

ಮಂಗಳವಾರ, 27 ನವೆಂಬರ್ 2018 (20:03 IST)
ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರು ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ‌.

ಕಳೆದ ತಿಂಗಳ ಹಿಂದೆ ದಾವಣಗೆರೆ ಯ ಪ್ರತಾಪ್ ಎಂಬ ಯುವಕ ಚಿತ್ರದುರ್ಗ ಜಿಲ್ಲೆ ಚೆಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಲಲಿತ ಎಂಬ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ಆದ್ರೆ ಯುವಕನ ಪೋಷಕರು ಇಬ್ಬರನ್ನೂ ಬೇರೆ ಬೇರೆ ಮಾಡಲು ಹೊರಟಿದ್ದಾರೆ ಎಂದು ನಮಗೆ ರಕ್ಷಣೆ ಬೇಕು ಎಂದು ಚಿತ್ರದುರ್ಗದ ಎಸ್ಪಿ ಆಫೀಸ್ಗೆ ಪ್ರೇಮಿಗಳು ಬಂದಿದ್ದಾರೆ.

ಪ್ರತಾಪ್ ಗಿಂತ ಲಲಿತಾ ವಯಸ್ಸಿನಲ್ಲಿ ದೊಡ್ಡವಳು ಎಂಬ ಕಾರಣಕ್ಕೆ ಯುವಕನ ಪೋಷಕರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರ ಮೂಲಕ ನಮ್ಮ ಮೇಲೆ ದೌರ್ಜನ್ಯ ಮಾಡಲು ಬರುತ್ತಿದ್ದಾರೆ. ಅಲ್ಲದೇ ಈಗಾಗಲೇ ಲಲಿತಾ ಗರ್ಭಿಣಿಯಾಗಿದ್ದು, ನಮಗೆ ರಕ್ಷಣೆ ಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಹತ್ತಿರ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ