ಯೋಧನ ಕುಟುಂಬಕ್ಕೆ ಪ್ರತಿತಿಂಗಳು 500 ಕೊಡುತ್ತೇನೆ ಎಂದ ಪಿಎಸ್ಐ

ಶನಿವಾರ, 16 ಫೆಬ್ರವರಿ 2019 (12:07 IST)
ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮಂಡ್ಯದ ಯೋಧ ಗುರುವಿನ‌ ಕುಟುಂಬಕ್ಕೆ ಪ್ರತಿ ತಿಂಗಳು ಐನೂರು‌ ರೂಪಾಯಿ ಕೊಡುವದಾಗಿ ಪಿ.ಎಸ್.ಐ ಹೇಳಿಕೆ ನೀಡಿದ್ದಾರೆ.

ವಿಜಯಪುರ ‌ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಮಟ್ಟಿ ಪೋಲಿಸ್ ಠಾಣೆಯ ಪಿ.ಎಸ್.ಐ ಈ ಹೇಳಿಕೆ ನೀಡಿದ್ದಾರೆ.

ಪಿ.ಎಸ್.ಐ  ಎಸ್.ವಾಯ್.ನಾಯ್ಕೋಡಿ ಪ್ರತಿ‌ ತಿಂಗಳ‌ ಸಂಬಳದಲ್ಲಿ‌ ಐನೂರು‌ ರೂಪಾಯಿ ಕೊಡುವದಾಗಿ ಹೇಳಿದ್ದಾರೆ. ನಿವೃತ್ತಿ ಆದರೂ ಕೂಡಾ ಪೆನ್ ಷನ್ ಹಣದಲ್ಲೂ ಐನೂರು ರೂಪಾಯಿ ತಿಂಗಳಿಗೆ ಕೊಡುವದಾಗಿ ಹೇಳಿದ್ದಾರೆ. ಪಿ.ಎಸ್.ಐ ಎಸ್.ವಾಯ್.ನಾಯ್ಕೋಡಿ‌ ಕಾರ್ಯಕ್ಕೆ‌ ಸಾರ್ವಜನಿಕರಿಂದ‌ ಪ್ರಶಂಸೆ ವ್ಯಕ್ತವಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ