ರಾಜ್ಯ ಸರ್ಕಾರಕ್ಕೆ ಈ‌ ನಾಡಿನ ನೆಲ‌ಜಲದ ಬಗ್ಗೆ ಕಾಳಜಿ ಇಲ್ಲ-ಬಿ ವೈ ವಿಜಯೇಂದ್ರ

geetha

ಬುಧವಾರ, 10 ಜನವರಿ 2024 (14:42 IST)
ರಾಜ್ಯದ ಟ್ಯಾಬ್ಲೋಗಳ‌ ಕಡೆಗಣನೆ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರವಾಗಿ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.ರಾಜ್ಯ ಸರ್ಕಾರಕ್ಕೆ ಈ‌ನಾಡಿನ ನೆಲ‌ಜಲದ ಬಗ್ಗೆ ಕಾಳಜಿ ಇಲ್ಲ.ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಕುರಿತ ಹೇಳಿಕೆಗೆ ಮೊದಲು ಸಿಎಂ ಉತ್ತರ ಕೊಡಲಿ,ಕರ್ನಾಟಕದ ಟ್ಯಾಬ್ಲೋಗಳ ವಿಚಾರದಲ್ಲಿ ಕೇಂದ್ರಕ್ಕೆ ದುರುದ್ದೇಶ ಇಲ್ಲ.ಕರ್ನಾಟಕ, ಗೋವಾ ಸೇರಿ ಕೆಲವು ರಾಜ್ಯಗಳಿಗೆ ಅವಕಾಶ ಸಿಕ್ಕಿಲ್ಲ ಇದಕ್ಕೆ ಕಾರಣ ಬೇರೆ ರಾಜ್ಯಗಳಿಗೆ ಅವಕಾಶ ಸಿಗಲಿ ಅಂತ ಅಷ್ಟೇ,ಸಿಎಂ ಬರ, ರೈತರ ಬಗ್ಗೆ ಮೊಸಳೆ ಕಣ್ಣೀರು ಮಾತ್ರ ಹಾಕ್ತಿದಾರೆ.ನಿಜವಾದ ಕಾಳಜಿ ಅವರಿಗೆ  ಇಲ್ಲ.ಎಲ್ಲ ವಿಚಾರಗಳಲ್ಲೂ ರಾಜ್ಯ ಸರ್ಕಾರ ರಾಜಕಾರಣ ಮಾಡೋದು ಸರಿಯಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ