ನೀವು ದೂರದರ್ಶನದಲ್ಲಿ ಕಾಣಿಸಿಕೊಂಡರೆ ವೈರಸ್ ಮಾಯವಾಗುವುದಿಲ್ಲ- ಪ್ರಧಾನಿ ಕಾಲೆಳೆದ ಸಿದ್ದರಾಮಯ್ಯ

ಶನಿವಾರ, 24 ಏಪ್ರಿಲ್ 2021 (11:00 IST)
ಬೆಂಗಳೂರು : ದೇಶದಾದ್ಯಂತ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಅವರು ಹೆಚ್ಚು ಪೀಡಿತ  ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ.

ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಯಾವುದೇ ಉದ್ದೇಶವಿಲ್ಲದೆ ನೀವು ಪದೇ ಪದೇ ದೂರದರ್ಶನದಲ್ಲಿ ಕಾಣಿಸಿಕೊಂಡರೆ ವೈರಸ್ ಮಾಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.

ಅಲ್ಲದೇ ನೀವು ಸಿಎಂ ಗಳಿಗೆ ಪಾಠ ಕಲಿಸಲು ಮುಖ್ಯೋಪಾಧ್ಯಾಯರಲ್ಲ. ಮೊದಲು ರಾಜ್ಯ ಸರ್ಕಾರಗಳು ಸಲ್ಲಿಸಿದ ವಿನಂತಿಗಳನ್ನು ಪೂರೈಸುವ ಮೂಲಕ ನಿಮ್ಮ ಜವಾಬ್ದಾರಿಯನ್ನು ತೋರಿಸಿ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ