ಹೆಂಡತಿಯ ಕತ್ತು ಕೊಯ್ದು ಪರಾರಿಯಾದ ಪತಿ

ಮಂಗಳವಾರ, 23 ಜನವರಿ 2018 (21:22 IST)
ಹೆಂಡತಿಯನ್ನು ಕಾಡಿಗೆ ಕರೆದೊಯ್ದ ಪತಿಯೊಬ್ಬ ಆಕೆಯ ಕತ್ತು ಕೊಯ್ದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ.

ಶಿಡ್ಲಘಟ್ಟ ತಾಲೂಕಿನ ಬುಡಗವಾರಪಲ್ಲಿ ಗ್ರಾಮದ ಬಳಿ ಆಲಗುರ್ಕಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುಮಾ ಎಂಬ ಗೃಹಿಣಿಯ ಕತ್ತನ್ನು ಪತಿ ಶ್ರೀನಿವಾಸ ಕೊಯ್ದಿದ್ದಾನೆ.
 
ಪೋಷಕರಿಗೆ ಕರೆ ಮಾಡಿ ವಿಷಯವನ್ನು ಸುಮಾ ತಿಳಿಸಿದ ನಂತರ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಸುಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪರಾಗಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ