ಹಿಂದುಗಳಲ್ಲಿಯೂ ಗೋಮಾಂಸ ಸೇವಿಸುವವರು ಇದ್ದಾರೆ: ಪೇಜಾವರ್ ಹೇಳಿಕೆಗೆ ಮುತಾಲಿಕ್ ಕಿಡಿ

ಗುರುವಾರ, 29 ಜೂನ್ 2017 (13:18 IST)
ಮುಸಲ್ಮಾನರು ಮಾತ್ರವಲ್ಲ, ಹಿಂದುಗಳಲ್ಲಿಯೂ ಗೋಮಾಂಸ ಸೇವಿಸುವವರು ಇದ್ದಾರೆ ಎನ್ನುವ ಪೇಜಾವರ ಶ್ರೀಗಳ ಹೇಳಿಕೆಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳಲ್ಲಿಯೂ ಗೋಮಾಂಸ ಸೇವಿಸುವವರು ಇದ್ದಾರೆ ಎನ್ನುವ ಪೇಜಾವರ ಶ್ರೀಗಳ ಹೇಳಿಕೆ ಹಿದುಗಳಿಗೆ ಅಪಮಾನ ಮಾಡುವಂತಹದಾಗಿದೆ ಎಂದು ಗುಡುಗಿದ್ದಾರೆ.
 
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದು ರಾಮಮಂದಿರ ನಿರ್ಮಿಸುವ ಹೋರಾಟದಲ್ಲಿ ಪಾಲ್ಗೊಂಡಿದ್ದ ಶ್ರೀಗಳು ಇದೀಗ ಮುಸಲ್ಮಾನರ ಪರವಾಗಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ತಿಳಿಸಿದ್ದಾರೆ.
 
ಗೋಮಾತೆಯನ್ನು ಪೂಜಿಸುವ ಹಿಂದುಗಳು ಯಾವುದೇ ಕಾರಣಕ್ಕೂ ಗೋಮಾಂಸ ಸೇವಿಸುವುದಿಲ್ಲ. ಪೇಜಾವರ ಶ್ರೀಗಳು ಕೂಡಲೇ ಕ್ಷಮೆಯಾಚಿಸಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ