ಜೆಡಿಎಸ್ ಪಕ್ಷದಿಂದ ತಮ್ಮನ್ನು ದೂರ ಮಾಡುವ ಪಿತೂರಿ ನಡೆಯುತ್ತಿದೆ ಎಂದ ಜಿ.ಟಿ.ದೇವೇಗೌಡ
ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿಗೆ ಬರಲಿ. ಇಲ್ಲಿಗೆ ಬಂದು ನನ್ನನ್ನು ಹೊರಹಾಕಲಿ . ಆ ಮೇಲೆ ಏನು ಮಾಡಬೇಕು ಎಂದು ನೋಡಿದ್ರೆ ಆಯ್ತು. ನನ್ನನ್ನು ಜೆಡಿಎಸ್ ಪಕ್ಷದಿಂದ ದೂರ ಮಾಡುವ ಪಿತೂರಿ ಮೊದಲಿನಿಂದಲೂ ನಡೆಯುತ್ತಿದೆ. ನನಗೂ 75 ವರ್ಷ ವಯಸ್ಸಾಯ್ತು, ಈಗ ರಾಜಕಾರಣ ಕಷ್ಟ. ಇನ್ನೆರಡು ವರ್ಷ ನಾನು ಶಾಸಕನಾಗಿ ಇರುತ್ತೇನೆ. ಆಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸ್ತೇನೆ ಎಂದು ಅವರು ತಿಳಿಸಿದ್ದಾರೆ.