“ಕಳೆದ ಏಳು ವರ್ಷಗಳಲ್ಲಿ ಮನ್ ಕೀ ಬಾತ್ ಅನ್ನು ಸರ್ಕಾರದ ಸಾಧನೆ ಹೇಳುವ ವೇದಿಕೆಯಾಗಿ ಬಳಸಿಕೊಂಡಿದ್ದಿಲ್ಲ. ಏಕೆಂದರೆ ಇದು ಜನರ ಸಾಧನಾಗಾಥೆಗಳನ್ನು ಬಿಂಬಿಸುವ, ಸಮೂಹದ ಶಕ್ತಿ ಪರಿಚಯಿಸುವ ವೇದಿಕೆ” ಎನ್ನುತ್ತ 2021ರ ಕೊನೆಯ ಮಾಸಿಕ ರೆಡಿಯೋ ಕಾರ್ಯಕ್ರಮ ನೀಡಿದ ಪ್ರಧಾನಿ ನರೇಂದ್ರ ಮೋದಿ, ಈ ಸಂಚಿಕೆಯಲ್ಲಿ ಹಲವು ಸ್ಫೂರ್ತಿಗಾಥೆಗಳನ್ನು, ಪ್ರೇರಕ ಉದಾಹರಣೆಗಳನ್ನು ಜನರ ಮುಂದಿಸಿರಿಸಿದರು.
6. ಅರುಣಾಚಲ ಪ್ರದೇಶ ಸುಮಾರು 500 ವಿಶಿಷ್ಟ ಪಕ್ಷಿಪ್ರಬೇಧಗಳ ನಾಡು. ಇತ್ತೀಚೆಗೆ ಅಲ್ಲಿನ ಜನ ಸ್ವಯಂಪ್ರೇರಿತರಾಗಿ ತಮ್ಮಲ್ಲಿನ ಏರ್ ಗನ್ ಗಳನ್ನು ಹಿಂತಿರುಗಿಸಿದ್ದಾರೆ. ಸುಮಾರು 1,600 ಏರ್ ಗನ್ ಗಳು ಆಡಳಿತಕ್ಕೆ ಸಲ್ಲಿಕೆಯಾಗಿದ್ದು, ಪಕ್ಷಿಗಳ ಹತ್ಯೆ ತಡೆಯುವಲ್ಲಿ ಇದು ಪ್ರಮುಖ ಹೆಜ್ಜೆ.
8. ಡಿಜಟಲೀಕರಣದ ಮೂಲಕ ದಾಖಲೆಗಳನ್ನು ಸಂರಕ್ಷಿಸುವ ಕೆಲಸ ಆರಂಭವಾದ ಮೇಲೆ ಸರ್ಕಾರಿ ಇಲಾಖೆಗಳಲ್ಲಿ ಹಳೆ ಕಡತಗಳು ಬಿದ್ದುಕೊಂಡಿರುವುದು ಕಡಿಮೆಯಾಗಿದೆ. ಅಂಚೆ ಇಲಾಖೆಯ ಆವರಣದಲ್ಲಿ ಹೆಚ್ಚುವರಿ ಕಡತಗಳಿಂದ ಮುಕ್ತವಾಗಿರುವ ಜಾಗವೀಗ ಕೆಫೆಟೀರಿಯ ಆಗಿದೆ, ಪರಿಸರ ಸಚಿವಾಲಯದ ಕಡತಗಳನ್ನು ಸುರಿವ ಜಾಗ ವ್ಯಾಯಾಮ ಕೇಂದ್ರವಾಗಿದೆ.