ನಮ್ಮ ಈ‌ ಸರ್ಕಾರ ನುಡಿದಂತೆ ನಡೆದ ಸರ್ಕಾರ -ಉಮಾ ಶ್ರೀ

ಗುರುವಾರ, 31 ಆಗಸ್ಟ್ 2023 (20:22 IST)
ಗೃಹಲಕ್ಷ್ಮೀ ಯೋಜನೆ ಜಾರಿ ವಿಚಾರವಾಗಿ ಉಮಾಶ್ರೀ ಪ್ರತಿಕ್ರಿಯಿಸಿದ್ದು,ನಮ್ಮ ಈ‌ ಸರ್ಕಾರ ನುಡಿದಂತೆ ನಡೆದ ಸರ್ಕಾರ.ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಯನ್ನ ಹೇಳಿದ್ವಿ.ಪ್ರತಿಯೊಂದು ಯೋಜನೆಯನ್ನ  ಹಂತಹಂತವಾಗಿ ಜಾರಿ ಮಾಡ್ತಿದ್ದೇವೆ.ನೆನ್ನೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ.ಇದು ಬಹಳ ಅನುಕೂಲಕರವಾದ ಯೋಜನೆ ಯಾವುದೇ ಮಹಿಳೆಗೆ ೨೦೦೦ ಸಾವಿರ ಸಿಗುತ್ತೆ ಅಂದ್ರೆ ಬಹಳ ಅನುಕೂಲ .ಗೃಹಜ್ಯೋತಿ ಕೂಡ ಅಷ್ಟೇ ಅನೂಕೂಲ ಆಗುತ್ತೆ.ಮುಂದೆ ಯುವಕರಿಗೆ ಕೂಡ ಯೋಜನೆ ತರ್ತೇವೆ ಎಂದು ಉಮಾಶ್ರೀ ಹೇಳಿದ್ದಾರೆ.
 
ಎಂಎಲ್ಸಿ ಸ್ಥಾನಕ್ಕೆ ತೃಪ್ತಿನಾ ಎಂಬ ವಿಚಾರಕ್ಕೆ ಸ್ಥಾನದಲ್ಲಿ ಸಣ್ಣದು ದೊಡ್ಡದು ಎಂಬುದು ಇಲ್ಲ.ಕೊಟ್ಟಿರೋ ಸ್ಥಾನವನ್ನ ಸರ್ಮಥವಾಗಿ ನಿಭಾಯಿಸಬೇಕು ಎಂದು ಉಮಾಶ್ರೀ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ