ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಈ ಪಾತ್ರವೇ ಅತೀ ಇಷ್ಟವಂತೆ

ಗುರುವಾರ, 15 ಆಗಸ್ಟ್ 2019 (15:00 IST)
ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ಕನ್ನಡ ಚಿತ್ರರಸಿಕರ ಮನೆ ಮಾತಾಗಿದ್ದಾರೆ. ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡಿದ್ದರೂ ಈ ಪಾತ್ರ ಮಾತ್ರ ಅವರಿಗೆ ಬಲು ಇಷ್ಟವಂತೆ.

ಈ ಹಿಂದೆ ಸಂಗೊಳ್ಳಿ ರಾಯಣ್ಣನಾಗಿ ಅಮೋಘ ಅಭಿನಯ ನೀಡಿದ್ದ ದರ್ಶನ್, ಇದೀಗ ದುರ್ಯೋಧನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇನ್ಮುಂದಿನ ದಿನಗಳಲ್ಲಿ ಮದಕರಿ ನಾಯಕನ ಪಾತ್ರ ಸಿಕ್ಕರೆ ಅದನ್ನ ಮಾಡೋಕೆ ತುಂಬಾ ಖುಷಿ ಮತ್ತು ಆಸೆ ಇದೆ ಅಂತ ಹೇಳಿಕೊಂಡಿದ್ದಾರೆ.

‘ನನ್ನ ಪ್ರಕಾರ’ ಚಲನಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಮಾತನಾಡಿದ ದರ್ಶನ್,  ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಇದೇ ರೀತಿ ಪಾತ್ರ ಬೇಕು ಅಥವಾ ಫಿಲ್ಮ್ ಕೊಡಬೇಕು ಅಂತ ಹೇಳೋಕೆ ಸಾಧ್ಯವಾಗೋದಿಲ್ಲ ಅಂತಾನೂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ