ನೀರು, ವಿದ್ಯೆ, ಮನೆ ಕೊಟ್ಟವರನ್ನು ಜನ ಮರೆಯೋಲ್ಲ,ಜೈಲಿಗೆ ಹೋದವರನ್ನೂ ಜನ ಮರೆಯೋಲ್ಲ: ಸಿಎಂ

ಸೋಮವಾರ, 24 ಜುಲೈ 2017 (15:43 IST)
ನೀರು ವಿದ್ಯೆ, ಮನೆ ಕೊಟ್ಟವರನ್ನು ಜನ ಮರೆಯೋಲ್ಲ, ಜೈಲಿಗೆ ಹೋದವರನ್ನು ಜನ ಮರೆಯೋಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ,
 
ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ನೀವು ಕೊಡುವ ತೆರಿಗೆಯಿಂದ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಜನತೆಗೆ ಅಗತ್ಯವಾಗಿರುವ ಮೂಲಸೌಲಭ್ಯಗಳಿಗಾಗಿ ತೆರಿಗೆ ಹಣ ಬಳಸಿಕೊಳ್ಳಲಾಗುತ್ತಿದೆ ಎಂದರು.
 
ಹಿಂದಿನ ಸರಕಾರಗಳು ನೀರು ಕೊಡಲು ಸಾಧ್ಯವಾಗದಿದ್ದರೂ ನಗರ ಬೆಳೆಸಿದೆ, ನಾವು ಬಂದ ನಂತರ ಅಂತಹ ಪ್ರದೇಶಗಳಿಗೆ ನೀರು ಪೂರೈಸಿದ್ದೇವೆ. ಇದನ್ನು ರಾಜ್ಯದ ಜನತೆ ಮರೆಯುವುದಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
 
ಕೆಲಸ ಮಾಡುವ ಎತ್ತಿಗೆ ಹುಲ್ಲು ಹಾಕಿ. ಕಳ್ಳ ಎತ್ತಿಗೆ ಹುಲ್ಲು ಹಾಕಬೇಡಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತನ್ನಿ. ಬಿಜೆಪಿಗೆ ಮತಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ಮತದಾರರಿಗೆ ಮನವಿ ಮಾಡಿದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ