ಇಂಡಿಯಾ ಈಸ್ ಗ್ರೇಟ್ ಎಂದ ಟಿಬೆಟ್ ಅಧ್ಯಕ್ಷ

ಗುರುವಾರ, 30 ಆಗಸ್ಟ್ 2018 (14:41 IST)
ಚೀನಾ ಕಪಿಮುಷ್ಠಿಯಲ್ಲಿರುವ ಟಿಬೆಟ್ ಅತಿ ಶೀಘ್ರದಲ್ಲೇ ಸ್ವತಂತ್ರವಾಗಲಿದ್ದು, ನಾವೆಲ್ಲರೂ ನಮ್ಮ ತಾಯ್ನಾಡಿಗೆ ಮರಳುತ್ತೇವೆ ಎಂದು ಟಿಬೆಟ್ ನ ದೇಶಾಂತರ ಅಧ್ಯಕ್ಷ ಲೋಬ್ಸಾಂಗ್ ಸಾಂಘ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಯ ಹನೂರು  ತಾಲೂಕಿನ ಒಡೆಯರ್ ಪಾಳ್ಯದಲ್ಲಿರುವ ಟಿಬೆಟ್ ನಿರಾಶ್ರಿತರ  ಶಿಬಿರಕ್ಕೆ  ಟಿಬೆಟ್ ಕೇಂದ್ರಾಢಳಿತ ಅಧ್ಯಕ್ಷ ಲೋಬ್ಸಾಂಗ್ ಸಂಘ್ಯ ಭೇಟಿ ನೀಡಿ, ಕುಂದುಕೊರತೆ ಆಲಿಸಿದರರು. ಟಿಬೆಟ್ ದೇಶದ ರಾಜಕೀಯ ಹಾಗೂ ಆರ್ಥಿಕ ಸ್ಥಿಗತಿಗಳನ್ನ ವಿವರಿಸಿದರು.

ಇದಕ್ಕೊ ಮುನ್ನ ಒಡೆಯರ್ ಪಾಳ್ಯ ಟಿಬೇಟಿಯನ್ ಕ್ಯಾಂಪ್ ನ ಅಧ್ಯಕ್ಷ ತುಪ್ಪಾಂಗ್ ನೇತೃತ್ವದಲ್ಲಿ ಸಾಂಘ್ಯೆ ರವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಮಾತನಾಡಿದ ಅವರು, ಆಶ್ರಯ ಕೊಟ್ಟ ಭಾರತಕ್ಕೆ ನಾವು ಚಿರಋಣಿ, ಅದರಲ್ಲೂ ಕರ್ನಾಟಕ ರಾಜ್ಯ ಉತ್ತಮವಾಗಿ ಸ್ಪಂದಿಸಿದೆ. ಸದ್ಯದಲ್ಲೇ ಟಿಬೇಟ್ ಸ್ವತಂತ್ರಗೊಳ್ಳಲಿದ್ದು, ಅತಿ ಶೀಘ್ರದಲ್ಲೇ ನಮ್ಮ ತಾಯ್ನಾಡಿಗೆ ಮರಳುತ್ತೇವೆ. ಟಿಬೇಟ್ ಸ್ವತಂತ್ರಗೊಳ್ಳಲಿ ಎಂಬುದು ಇಡೀ ವಿಶ್ವದ ಹಾರೈಕೆ. ಭಾರತ ಗ್ರೇಟ್ ಫುಲ್ ಕಂಟ್ರಿ ಎಂದವರು ಶ್ಲಾಘನೀಯ ವ್ಯಕ್ತಪಡಿಸಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ