ಗೊಂದಲವಿಲ್ಲದೆ ಟಿಕೆಟ್​ ಫೈನಲ್

ಶನಿವಾರ, 8 ಏಪ್ರಿಲ್ 2023 (17:27 IST)
ರಾಜ್ಯದ BJP ನಾಯಕರು ಚರ್ಚೆ ಮಾಡಿ ಮೂರು ಹೆಸರನ್ನು ದಿಲ್ಲಿಗೆ ಕಳಿಸಿಕೊಡುವ ಕೆಲಸ ಮಾಡಿದ್ದಾರೆ. ಅದಕ್ಕೂ ಮುನ್ನ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ಇವತ್ತು ದೆಹಲಿಗೆ ಬಂದಿದೆ ಎಂದು ಬಿಜೆಪಿ ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.. ದೆಹಲಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಶಕ್ತಿ ಕೇಂದ್ರದಿಂದ ಮೇಲ್ಪಟ್ಟ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಳಿಕ ಹಾಲಿ ವಿಧಾನಸಭೆ ಅಭ್ಯರ್ಥಿ ಬಗ್ಗೆ ಮಾಹಿತಿ ಜಿಲ್ಲಾ ಮಟ್ಟಕ್ಕೆ ಬಂದಿದೆ. ಇವತ್ತು ನಡ್ಡಾ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮಾಜಿ ಸಿಎಂ B.S. ಯಡಿಯೂರಪ್ಪ, ಸಿಎಂ ಬಸವರಾಜ್​​​ ಬೊಮ್ಮಾಯಿ ಭಾಗಿಯಾಗಿದ್ದಾರೆ. ಹೊರಗಡೆ ಇರುವ ಹಾಗೆ ಯಾವುದೇ ಗೊಂದಲ ಇಲ್ಲ ಒಳ್ಳೆಯ ಆಯ್ಕೆ ಆಗುತ್ತೆ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ